ಚೂರಿ ಇರಿದು ಯುವಕನ ಕೊಲೆ

Update: 2019-07-10 12:49 GMT

ದಾವಣಗೆರೆ, ಜು.10: ಶಾಲೆಯ ಗೇಟು ಮುರಿಯುತ್ತಿರುವುದನ್ನು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ನಡೆದಿದೆ. 

ಅಂಜಿನಪ್ಪ(20) ಕೊಲೆಯಾದ ಯುವಕ. ಅಣಜಿ ಗ್ರಾಮದಲ್ಲಿ ಬಾಬು ಎನ್ನುವವರು ಶಾಲೆಯ ಗೇಟ್ ಮುರಿಯುತ್ತಿದ್ದುದನ್ನು ಅಂಜಿನಪ್ಪ ಎಂಬಾತ ವಿಡಿಯೋ ಮಾಡಿದ್ದಾನೆ. ಇದರಿಂದ ಕೋಪಗೊಂಡ ಬಾಬು ವೀಡಿಯೋ ಮಾಡುತ್ತಿದ್ದ ಅಂಜಿನಪ್ಪನನ್ನು ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಯುವಕನನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.   

ಕೊಲೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೋಡಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News