ಬಹುಮತ ಸಾಬೀತುಪಡಿಸುವುದು ನಮಗೆ ಗೊತ್ತಿದೆ: ಎಂ.ಬಿ.ಪಾಟೀಲ್

Update: 2019-07-12 12:58 GMT

ಬೆಂಗಳೂರು, ಜು.12: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವುದಾಗಿ ಹೇಳಿರುವುದರಲ್ಲಿ ತಪ್ಪೇನಿದೆ? ಬಹುಮತ ಹೇಗೆ ಸಾಬೀತುಪಡಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಮಾಡುವುದು ದೊಡ್ಡ ಸಂಗತಿಯಾ ಹೇಳಿ? ಘಟಾನುಘಟಿಗಳು ನಮ್ಮ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಬಿಜೆಪಿ ಮಾದರಿಯಲ್ಲಿ ನಾವು ಆಪರೇಷನ್ ಕಮಲ ಮಾಡುವುದಿಲ್ಲ ಎಂದರು.

ಬಹುಮತ ಸಾಬೀತುಪಡಿಸಲು ಏನು ಮಾಡಬೇಕೆಂದು ನಮಗೂ ತಿಳಿದಿದೆ. ವಿಶ್ವಾಸಮತಯಾಚನೆ ಹೇಗೆ ಆಗುತ್ತದೆ ಎಂಬುದನ್ನು ನೀವೆ ಕಾದು ನೋಡಿ. ಮುಖ್ಯಮಂತ್ರಿ ವಿಶ್ವಾಸಮತ ಪಡೆಯುವ ಪೂರ್ಣ ವಿಶ್ವಾಸವಿದೆ. ಸರಕಾರದಲ್ಲಿ ಯಾವ ಗೊಂದಲವು ಇಲ್ಲ. ಮೈತ್ರಿ ಸರಕಾರ ಸುಭದ್ರವಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News