ಮೈತ್ರಿ ಸರಕಾರ ಸಮಾನತೆ ಧರ್ಮ ಪಾಲಿಸಲಿಲ್ಲ: ಎಂಟಿಬಿ ನಾಗರಾಜ್

Update: 2019-07-13 12:28 GMT

ಬೆಂಗಳೂರು, ಜು.13: ಮೈತ್ರಿ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ಬೇಸರವಿದೆ. ಆಡಳಿತ ವಿಧಾನದಲ್ಲಿ ಬದಲಾವಣೆ ಆಗಬೇಕು. ಮೈತ್ರಿ ಸರಕಾರ ಸಮಾನತೆಯ ಧರ್ಮ ಪಾಲಿಸಲಿಲ್ಲ. ಇವೆಲ್ಲಾ ಬೇಸರದಿಂದಾಗಿ ರಾಜೀನಾಮೆ ಕೊಡಬೇಕಾಯಿತು ಎಂದು ಶಾಸಕ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಯಲ್ಲಿದ್ದ ಹಲವರು ಅತೃಪ್ತಿಯಿಂದ ದೂರದ ಮುಂಬೈಗೆ ಹೋಗಿದ್ದಾರೆ. ಅವರು ಮೊದಲೇ ತಮ್ಮ ಅತೃಪ್ತಿಯನ್ನು ಹೇಳಿಕೊಂಡಿದ್ದರು. ಆಗ ಇವರು ಯಾಕೆ ಸರಿಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅತೃಪ್ತ ಶಾಸಕರ ಸಮಸ್ಯೆಯನ್ನು ಬಗೆಹರಿಸುವಂತೆ ಸಿದ್ದರಾಮಯ್ಯಗೆ ನಾನೂ ಹೇಳಿದ್ದೆ. ನಾನು ಮತ್ತು ಸುಧಾಕರ ಇಲ್ಲೇ ಇದ್ದೀವಿ. ಎಲ್ಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಬಗ್ಗೆ ಏನೂ ಬೇಸರವಿಲ್ಲ. ಅವರು ನನಗೆ ಯಾವತ್ತಿಗೂ ನಾಯಕರೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News