ನಮ್ಮಿಂದ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ: ಎಂಟಿಬಿ ನಾಗರಾಜ್‌ಗೆ ಡಾ.ಜಿ.ಪರಮೇಶ್ವರ್ ಅಭಯ

Update: 2019-07-13 12:38 GMT

ಬೆಂಗಳೂರು, ಜು.13: ಶಾಸಕ ಮತ್ತು ಸಚಿವ ಸ್ಥಾನ್ಕಕೆ ಕೊಟ್ಟಿರುವ ರಾಜೀನಾಮೆಯನ್ನು ಅವರು ತಕ್ಷಣ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮಿಂದ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯೂ ಎಂಟಿಬಿ ನಾಗರಾಜು ಅವರ ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ. ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್ ಅವರ ಮನವೊಲಿಸಿ, ಪಕ್ಷಕ್ಕೆ ಒಳಿತಾಗುವ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರೇ ಕಟ್ಟಿದ ಪಕ್ಷ. ಅದನ್ನು ತೊಂದರೆಗೆ ಸಿಲುಕಿಸಬೇಡಿ, ಎಲ್ಲರಿಗಿಂತ ಪಕ್ಷ ದೊಡ್ಡದು ಎಂದು ನಾವು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅವರು ನಮ್ಮ ಮನವಿಗೆ ಒಪ್ಪಿದ್ದಾರೆ. ಮುಂದೆ ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಕಳೆದ 45 ವರ್ಷಗಳಿಂದ ಹೊಸಕೋಟೆ ಭಾಗದಲ್ಲಿ ಪಕ್ಷವನ್ನು ಕಟ್ಟಿರುವ ಎಂಟಿಬಿ ನಾಗರಾಜು ರಾಜೀನಾಮೆ ಕೊಟ್ಟಿದ್ದು ಸರಿ ಕಾಣಲಿಲ್ಲ. ಅವರಿಗೆ ಬೇಸರವಾಗಲು ಕಾರಣಗಳೇನು ಎಂಬುದನ್ನು ಹೇಳಿದ್ದರೆ, ಅದಕ್ಕೆ ಖಂಡಿತ ನಾವು ಸ್ಪಂದಿಸುತ್ತಿದ್ದೆವು. ಈಗಲೂ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News