ಮೋದಿ-ಶಾ ಆಪರೇಷನ್ ಕಮಲದ ಪಿತಾಮಹರು: ವಿ.ಎಸ್.ಉಗ್ರಪ್ಪ
Update: 2019-07-13 15:24 GMT
ಬಳ್ಳಾರಿ, ಜು.13: ದೇಶದಾದ್ಯಂತ ನಡೆಯುತ್ತಿರುವ ಆಪರೇಷನ್ ಕಮಲದ ಪಿತಾಮಹರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಗಿದ್ದಾರೆ. ಇವರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಹಾಳಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಆದಾಗಿನಿಂದ ಐದು ಬಾರಿ ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿ ವಿಫಲರಾಗಿದ್ದರು. ಈಗ ಆರನೆ ಬಾರಿ ಪ್ರಯತ್ನ ಮಾಡಲಾಗುತ್ತಿದೆ. ಇದರಲ್ಲೂ ಯಶಸ್ವಿಯಾಗುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಾತಿನಲ್ಲಿ ಹೇಳುವುದಕ್ಕೂ ಕಾರ್ಯದಲ್ಲಿ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಪ್ರಜಾಪ್ರಭತ್ವದ ಕುರಿತು ಮಾತನಾಡುತ್ತಲೆ, ಅದರ ಆಶಯಕ್ಕೆ ವಿರುದ್ಧವಾಗಿಯೆ ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.