ಸದ್ಯಕ್ಕಂತೂ ಸರಕಾರ ಸುಭದ್ರ, ಐದು ವರ್ಷ ಇರುತ್ತದೆ ಎಂದು ಹೇಳಲ್ಲ: ಸಚಿವ ಜಿ.ಟಿ. ದೇವೇಗೌಡ

Update: 2019-07-13 16:38 GMT

ಮೈಸೂರು,ಜು.13: ಮೈತ್ರಿ ಸರಕಾರ ಸದ್ಯಕ್ಕಂತೂ ಸುಭದ್ರವಾಗಿದೆ. ಐದು ವರ್ಷಗಳ ಕಾಲ ಇರುತ್ತದೆ ಎಂದು ನಾನು ಹೇಳಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತಯಾಚನೆ ಬಗ್ಗೆ ನಮಗೇನು ಭಯವಿಲ್ಲ, ಮತ್ತೆ ಮುಂಬೈಗೆ ಹೋಗುವ ಅಗತ್ಯವೂ ಇಲ್ಲ, ಎಲ್ಲವೂ ಇಲ್ಲೇ ಆಗುತ್ತದೆ. ಎಲ್ಲರೂ ಬಂದೇ ಬರುತ್ತಾರೆ ಎಂದು ಹೇಳಿದರು.

ಬಿಜೆಪಿಯವರಿಗೆ ರಿವರ್ಸ್ ಆಪರೇಷನ್ ಬಗ್ಗೆ ಭಯ ಇದಿಯೋ ನನಗೆ ಗೊತ್ತಿಲ್ಲ. ಆದರೆ ನಮಗಂತೂ ಸದ್ಯ ಯಾವುದೇ ಭಯ ಇಲ್ಲ, ನಾವು ಆರಾಮವಾಗಿಯೇ ಇದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News