ಬಿಜೆಪಿ ನಾಯಕರಿಗೆ ಮಾನ-ಮರ್ಯಾದೆ ಇಲ್ಲ: ಸಚಿವ ಡಿ.ಕೆ.ಶಿವಕುಮಾರ್

Update: 2019-07-14 13:01 GMT

ಬೆಂಗಳೂರು, ಜು.14: ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಪಾತ್ರವಿಲ್ಲವೆಂದು ಹೇಳುತ್ತಲೆ ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರಿಗೆ ಆಮಿಷ ಹಾಗೂ ಬೆದರಿಕೆ ಹಾಕಿ ಸೆಳೆಯುವಂತಹ ಕಾರ್ಯದಲ್ಲಿ ತೊಡಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಅಧಿಕಾರಬೇಕೆಂದು ಬಿಜೆಪಿ ನಾಯಕರು ನೇರವಾಗಿ ಹೇಳಲಿ. ಅದನ್ನು ಬಿಟ್ಟು ಮಾನ, ಮರ್ಯಾದೆ ಇಲ್ಲದವರ ರೀತಿಯಲ್ಲಿ ಸುಳ್ಳುಗಳನ್ನು ಹೇಳುತ್ತಲೆ ಪ್ರಜಾಪ್ರಭುತ್ವವನ್ನು ಹಾಳು ಮಾಡುವಂತಹ ಕೆಲಸದಲ್ಲಿ ನಿರತವಾಗಿದೆ ಎಂದು ಆಪಾಧಿಸಿದರು.

ಅತೃಪ್ತ ಕಾಂಗ್ರೆಸ್ ಶಾಸಕರಿಗೆ ವಿಮಾನ ಪ್ರಯಾಣ, ಹೋಟೆಲ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಬಿಜೆಪಿಯವರೆ ಮಾಡುತ್ತಿದ್ದಾರೆ. ಆದರೂ ಅತೃಪ್ತರು ನಮ್ಮ ಸಂಪರ್ಕದಲ್ಲಿಲ್ಲವೆಂದು ಸಬೂಬು ಹೇಳುತ್ತಾರೆ. ಎಲ್ಲವನ್ನು ಜನತೆ ನೋಡುತ್ತಿದ್ದು, ಸರಿ, ತಪ್ಪುಗಳನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News