ವಿಶ್ವಾಸಮತ: ಮೈತ್ರಿ ಸರಕಾರದ ಪರ ನಿಲ್ಲುವಂತೆ ಬಿಎಸ್​ಪಿ ಶಾಸಕ ಎನ್​.ಮಹೇಶ್​ಗೆ ಮಾಯಾವತಿ ಸೂಚನೆ

Update: 2019-07-21 15:52 GMT

ಲಕ್ನೋ, ಜು.21: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿರುವ ತಮ್ಮ ಸರ್ಕಾರದ ಪರವಾಗಿ ವಿಶ್ವಾಸಮತ ಯಾಚಿಸುತ್ತಿರುವ ಕರ್ನಾಟಕ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪರ ನಿಲ್ಲುವಂತೆ ರಾಜ್ಯದ ಏಕೈಕ ಬಿಎಸ್​ಪಿ ಶಾಸಕ ಎನ್​. ಮಹೇಶ್​ಗೆ ಬಿಎಸ್​ಪಿ ನಾಯಕಿ ಮಾಯಾವತಿ ಸೂಚಿಸಿದ್ದಾರೆ.

ಈ ಬಗ್ಗೆ ಭಾನುವಾರ ಟ್ವೀಟ್​ ಮಾಡಿರುವ ಅವರು, ಎಚ್​.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಎನ್​.ಮಹೇಶ್​ಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ, ಎಚ್​.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಿದ್ದು, ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್​.ರಮೇಶ್​ಕುಮಾರ್​ ಮತ ವಿಭಜನೆಗೆ ಹಾಕಿದಾಗ ತಾವು ಕಲಾಪಕ್ಕೆ ಗೈರುಹಾಜರಾಗುವುದಾಗಿ ಎನ್​.ಮಹೇಶ್​ ಹೇಳಿದ್ದರು. ಸರ್ಕಾರವನ್ನು ಬೆಂಬಲಿಸಬೇಕೆ, ಬೇಡವೇ ಎಂಬ ಬಗ್ಗೆ ಪಕ್ಷದ ಮುಖಂಡರಿಂದ ತಮಗೆ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದರಿಂದ ದೋಸ್ತಿ ಸರ್ಕಾರ ಚಿಂತೆಗೀಡಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News