ಡಾ.ಆನಂದ ವಿಟಿಯು ಕುಲಸಚಿವರಾಗಿ ನೇಮಕ

Update: 2019-07-21 16:24 GMT

ಬೆಂಗಳೂರು, ಜು.21: ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಎಸ್. ದೇಶಪಾಂಡೆ ಅವರನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಈ ಹಿಂದೆ ಕುಲಸಚಿವರಾಗಿದ್ದ ಪ್ರೊ.ಎಚ್.ಎನ್. ಜಗನ್ನಾಥರೆಡ್ಡಿ ಅವರ ಅಧಿಕಾರದ ಅವಧಿ ಮುಗಿದಿದ್ದರಿಂದ ಹೊಸ ನೇಮಕಾತಿ ನಡೆದಿದೆ. ದೇಶಪಾಂಡೆ ಅವರ ಅಧಿಕಾರದ ಅವಧಿ 2 ವರ್ಷಗಳದ್ದಾಗಿದೆ. ಎಂ.ಟೆಕ್, ಪಿಎಚ್‌ಡಿ ಪದವೀಧರರಾದ ಅವರಿಗೆ 31 ವರ್ಷಗಳ ಬೋಧನೆ ಹಾಗೂ ಆಡಳಿತದ ಅನುಭವವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News