ಗಾಂಜಾ ಮಾರಾಟ ಪ್ರಕರಣ: ಮೂವರ ಬಂಧನ

Update: 2019-07-21 17:43 GMT

ಶಿವಮೊಗ್ಗ, ಜು. 21: ಎರಡು ಪ್ರತ್ಯೇಕ ಘಟನೆಗಳಲ್ಲಿ, ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಡಿಸಿಐಬಿ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ದ್ರೌಪದಮ್ಮ ಸರ್ಕಲ್ ಬಳಿ ಜೆಪಿ ನಗರದ ನಿವಾಸಿ ಸಲ್ಮಾನ್ ಖಾನ್ ಯಾನೆ ಸಲ್ಲು ಎಂಬಾತನನ್ನು ಪೊಲೀಸರು ಬಂಧಿಸಿ, 20 ಗಾಂಜಾ ಪ್ಯಾಕೆಟ್ ಹಾಗೂ 570 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮತ್ತೊಂದು ಘಟನೆಯಲ್ಲಿ ಟ್ಯಾಂಕ್ ಮೊಹಲ್ಲಾ ಮುಖ್ಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ರಾಗಿಗುಡ್ಡದ ನಿವಾಸಿ ಮುಹಮ್ಮದ್ ಸುಹೇಲ್ (19) ಹಾಗೂ ಸಾಧಿಕ್ (18) ಎಂಬುವರನ್ನು ಬಂಧಿಸಿದ್ದಾರೆ. ಇವರಿಂದ 150 ಗ್ರಾಂ ತೂಕದ ಗಾಂಜಾ ಹಾಗೂ 500 ರೂ. ನಗದು ವಶಕ್ಕೆ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News