ವಿಜಯಪುರ: ಎಸಿಬಿ ದಾಳಿ ವೇಳೆ ನಕಲಿ ಅಧಿಕಾರಿ ಬಲೆಗೆ

Update: 2019-07-26 18:18 GMT

ವಿಜಯಪುರ, ಜು.26: ಎಸಿಬಿ ದಾಳಿ ವೇಳೆ ನಕಲಿ ಅಧಿಕಾರಿ ಬಲೆಗೆ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಚಂದ್ರಹಾಸ ಹೊಸಮನಿ ಸಿಕ್ಕಿ ಬಿದ್ದ ನಕಲಿ ಅಧಿಕಾರಿ. ಸರಕಾರಿ ಸಿಬ್ಬಂದಿಯಂತೆ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು, ಎಸಿಬಿ ಡಿಎಸ್ಪಿ ಮಲ್ಲೇಶ್ ದೊಡಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿತ್ತು ಎಂದು ಸಾರ್ವಜನಿಕರ ಆರೋಪಿಸಿದ್ದು, ವಿಜಯಪುರ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News