ಉಪ ಚುನಾವಣೆ ಘೋಷಣೆಗೆ ಮೊದಲೇ ಅಭ್ಯರ್ಥಿಗಳ ಆಯ್ಕೆಗೆ ‘ಕೈ’ ಕಸರತ್ತು ಪ್ರಾರಂಭ

Update: 2019-07-27 15:38 GMT

ಬೆಂಗಳೂರು, ಜು. 27: ರಾಜೀನಾಮೆ ನೀಡಿರುವ 15 ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಗೆಲುವಿಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ.

ಕೆ.ಆರ್.ಪುರ-ಕೆಪಿಸಿಸಿ ಕಾನೂನು ಘಟಕದ ಸಿ.ಎಂ.ಧನಂಜಯ, ಮಹಾಲಕ್ಷ್ಮಿ ಲೇಔಟ್-ಮಾಗಡಿ ಬಾಲಕೃಷ್ಣ, ರಾಜರಾಜೇಶ್ವರ ನಗರ-ಪ್ರಿಯಾಕೃಷ್ಣ, ಹೊಸಕೋಟೆ- ಮಂಜುನಾಥಗೌಡ, ಕೆ.ಆರ್.ಪೇಟೆ-ಚಲುವರಾಯಸ್ವಾಮಿ, ಹುಣಸೂರು- ಮಂಜುನಾಥ್, ಹಿರೇಕೆರೂರು-ಯು.ಬಿ.ಬಣಕಾರ್ ಅವರ ಪುತ್ರನನ್ನು ಕಣಕ್ಕಿಳಿಸಲು ಚರ್ಚೆ ನಡೆದಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರಕಾರ ಪತನಕ್ಕೆ ಕಾರಣರಾಗಿರುವ ಅತೃಪ್ತ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ದೃಢ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಮುಖಂಡರು, ಆ ಕ್ಷೇತ್ರಗಳ ಗೆಲುವಿಗೆ ರಣತಂತ್ರ ರೂಪಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News