ಸಾರಿಗೆ ಬಸ್ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2019-07-27 17:49 GMT
ಮಂಡ್ಯ, ಜು.27: ಸಾರಿಗೆ ಸಂಸ್ಥೆ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕು ಬೆಂಗಳೂರು ಮೈಸೂರು ಹೆದ್ದಾರಿಯ ಕೆಸ್ತೂರು ವೃತ್ತದ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಮದ್ದೂರು ತಾಲೂಕು ಅಡಗನಹಳ್ಳಿ ಗ್ರಾಮದ ಯುವಕ ಕಾರ್ತಿಕ್ ಮೃತಪಟ್ಟ ಬೈಕ್ ಸವಾರ. ಗ್ರಾಮದಿಂದ ಮದ್ದೂರು ಕಡೆಗೆ ಆಗಮಿಸುತ್ತಿದ್ದಾಗ ಸಾರಿಗೆ ಬಸ್ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.