ತಾಯಿಯ ಅಸ್ತಿ ವಿಸರ್ಜನೆ ವೇಳೆ ಕಾವೇರಿ ನದಿಯಲ್ಲಿ ಮಗ ಮೃತ್ಯು
Update: 2019-08-01 16:54 GMT
ಮಂಡ್ಯ: ತಾಯಿಯ ಅಸ್ತಿ ವಿಸರ್ಜನೆಗೆ ಆಗಮಿಸಿದ್ದ ಮಗ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣದ ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ನಡೆದಿದೆ.
ಶ್ರೀಕಾಂತ್ (45) ಸಾವಿಗೀಡಾದ ದುರ್ದೈವಿ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಅವರ ಅಸ್ತಿ ವಿಸರ್ಜನೆಗಾಗಿ 5 ಮಂದಿಯೊಂದಿಗೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು. ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ಮೃತದೇಹಕ್ಕಾಗಿ ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.