ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಂತಿಮ ನಮನ

Update: 2019-08-07 12:35 GMT

ಹೊಸದಿಲ್ಲಿ, ಆ. 7: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅಂತಿಮ ನಮನ ಸಲ್ಲಿಸಿದರು.

ಸುಷ್ಮಾ ಸ್ವರಾಜ್ ಅವರು ಉತ್ತಮ ವಾಗ್ಮಿ ಹಾಗೂ ಅಸಾಧಾರಣ ನಾಯಕತ್ವದ ಗುಣ ಹೊಂದಿದ್ದರು. ವಿದೇಶಾಂಗ ಸಚಿವೆಯಾಗಿ ಅದ್ವಿತೀಯ ಸೇವೆ ಸಲ್ಲಿಸಿದ್ದ ಅವರು ಇಂದಿರಾಗಾಂಧಿ ನಂತರ ಈ ಹುದ್ದೆ ಅಲಂಕರಿಸಿದ ಎರಡನೆ ಮಹಿಳೆಯಾಗಿದ್ದರು. ಸಂಕಷ್ಟದಲ್ಲಿರುವ ಜನರ ನೆರವಿಗೆ ಸ್ವಯಂ ಪ್ರೇರಣೆಯಿಂದ ಧಾವಿಸುತ್ತಿದ್ದ ಕಾರಣ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ವಿದೇಶಿ ಮಾಧ್ಯಮಗಳೂ ಅವರನ್ನು ಅತ್ಯಂತ ಜನಪ್ರಿಯ ವಿದೇಶಾಂಗ ಸಚಿವೆ ಎಂದು ಬಣ್ಣಿಸಿದ್ದವು. ಸುಷ್ಮಾ ಅವರಿಗೆ ಕರ್ನಾಟಕದೊಂದಿಗೆ ಇದ್ದ ಅವಿನಾಭಾವ ಸಂಬಂಧವನ್ನು ಸ್ಮರಿಸಿಕೊಂಡಿರುವ ಯಡಿಯೂರಪ್ಪ, ಬಳ್ಳಾರಿಯಲ್ಲಿ 1999ರಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದಾಗಿನ ಒಡನಾಟ, ನಂತರ ಸುಮಾರು 10 ವರ್ಷಗಳ ಕಾಲ ಪ್ರತಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಕನ್ನಡದಲ್ಲೇ ಮಾತನಾಡುತ್ತ, ಜನರಲ್ಲಿ ಒಂದಾಗಿ ಬೆರೆಯುವ ಅವರ ಸ್ವಭಾವ ಅನುಸರಣೀಯ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಬಿಎಸ್‌ವೈ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News