ಹನೂರು: ನೀರಿನ ರಭಸಕ್ಕೆ ಕೊಚ್ಚಿಹೋದ ಪಾಲಮೆಡು ಸೇತುವೆ

Update: 2019-08-13 12:08 GMT

ಹನೂರು: ಕಾವೇರಿ ನೀರು ಹರಿಯುತ್ತಿರುವ ರಭಸಕ್ಕೆ ಹೋಗನಕಲ್ ಜಲಪಾತದ ಪಾಲಮೆಡು ಸೇತುವೆ ಕೊಚ್ಚಿ ಹೋಗಿದೆ. ರಾಜ್ಯದ ಗಡಿಹಂಚಿನಲ್ಲಿರುವ  ಜಲಪಾತದ ರಮಣೀಯ ದೃಶ್ಯವನ್ನು ವಿಕ್ಷಣೆ ಮಾಡುವ ದೃಷ್ಟಿಯಿಂದ ಕರ್ನಾಟಕದ ಭಾಗದಲ್ಲಿ ಪ್ರವಾಸಿಗರಿಗಾಗಿ ವಿಕ್ಷಣೆಯ ಗ್ಯಾಲರಿಯನ್ನು ನಿರ್ಮಾಣಮಾಡಲಾಗಿತ್ತು. ಈ ಗ್ಯಾಲರಿಯ ಬಳಿ ಪ್ರವಾಸಿಗರು ತೆರಳಲು ನಿರ್ಮಿಸಿದ್ದ ಸೇತುವೆ ನೀರಿನಲ್ಲಿ ಕೊಚ್ಚಿಕೂಂಡು ಹೋಗಿದೆ. 

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಾಲ್ಸ್ ನ ಒಳಗಡೆ ಪ್ರವಾಸಿಗರು ತೆರಳಲು ಮತ್ತು ಇಲ್ಲಿ ನಡೆಯುವ ಪ್ರವಾಸೋದ್ಯಮ ಚಟುವಟಿಕೆಗಳನ್ನು ತಾತ್ಕಲಿಕವಾಗಿ ನಿರ್ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News