ಸಿಎಂ ಪರಿಹಾರ ನಿಧಿಗೆ 4.09 ಕೋಟಿ ರೂ.ದೇಣಿಗೆ
Update: 2019-08-14 17:28 GMT
ಬೆಂಗಳೂರು, ಆ.14: ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಆ.9 ರಿಂದ ಈವರೆಗೆ 4.09 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.
ಆ.14ರಂದು 67 ಚೆಕ್ಗಳು ಸ್ವೀಕೃತಿಯಾಗಿದ್ದು, ಚೆಕ್ಗಳ ಮೊತ್ತ 37,99,028 ರೂ.ಗಳು ಹಾಗೂ ಒಟ್ಟಾರೆಯಾಗಿ 1.39 ಕೋಟಿ ರೂ.ಗಳು ಸ್ವೀಕೃತಿಯಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಬಯಸುವವರು https://cmrf.karnataka.gov.in ವೆಬ್ ತಾಣದಲ್ಲಿ ಆರ್ಟಿಜಿಎಸ್ ಅಥವಾ ಎನ್ಇಎಫ್ಟಿ ಮೂಲಕ ನೇರವಾಗಿ ಹಣ ಪಾವತಿಸಬಹುದು.