ಜಿಲ್ಲಾ ಸಮಿತಿ ಬದಲಾವಣೆ ಹಿನ್ನೆಲೆ: ಕಾಂಗ್ರೆಸ್‌ನಿಂದ ವೀಕ್ಷಕರ ನೇಮಕ

Update: 2019-08-21 17:02 GMT

ಬೆಂಗಳೂರು, ಆ. 21: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಿಗೆ ಎಐಸಿಸಿ ಸೂಚನೆ ಮೇರೆಗೆ ಕಾಂಗ್ರೆಸ್ ವೀಕ್ಷರನ್ನು ನೇಮಕ ಮಾಡಿದೆ.

ಚಿತ್ರದುರ್ಗ-ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ದಾವಣಗೆರೆ- ಮಾಜಿ ಶಾಸಕ ಪಿ.ಎಂ.ಅಶೋಕ್, ಬಾಗಲಕೋಟೆ-ಅಬ್ದಲ್ ಜಬ್ಬಾರ್, ರಾಯಚೂರು- ಆರ್.ಬಿ.ತಿಮ್ಮಾಪುರ್, ದಕ್ಷಿಣ ಕನ್ನಡ-ಶಾಸಕ ತನ್ವಿರ್ ಸೇಠ್, ವಿಜಯಪುರ-ಡಿ. ಆರ್.ಪಾಟೀಲ್, ಕೋಲಾರ-ಎಂ.ನಾರಾಯಣಸ್ವಾಮಿ.

ಚಿಕ್ಕಮಗಳೂರು-ಎಂ.ಎ. ಗೋಪಾಲಸ್ವಾಮಿ, ಬೆಳಗಾವಿ-ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ನೇಮಕ ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿ ಉಲ್ಲಾ ಆದೇಶ ಹೊರಡಿಸಿದ್ದು, ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸೆಪ್ಟಂಬರ್ 10ರ ಒಳಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News