ಕೆಎಂಎಫ್ ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಅರ್ಜಿ: ಆ.31ಕ್ಕೆ ಚುನಾವಣೆ ನಡೆಯಲಿದೆ- ರಾಜ್ಯ ಸರಕಾರ

Update: 2019-08-22 16:47 GMT

ಬೆಂಗಳೂರು, ಆ.21: ಕೆಎಂಎಫ್ ಚುನಾವಣೆಯನ್ನು ಮುಂದೂಡಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆ.31ರಂದು ಚುನಾವಣೆ ನಡೆಸುವುದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. 

ಈ ಕುರಿತು ಎಚ್.ಡಿ.ರೇವಣ್ಣ ಸೇರಿ ಎಂಟು ಜನರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಕಳೆದ ಜು.29ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಚುನಾವಣಾ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಿ ಗದ್ದಲ ನಡೆಯುತ್ತಿತ್ತು. ಅಂದಿನ ಸಮ್ಮಿಶ್ರ ಸರಕಾರ ತನ್ನ ಬಹುಮತ ಕಳೆದುಕೊಂಡಿತ್ತು. ಇದೇ ವೇಳೆ ಕೆಎಂಎಫ್ ಚುನಾವಣೆ ನಿಗಧಿಯಾಗಿತ್ತು. ಹೀಗಾಗಿ, ಚುನಾವಣೆಯನ್ನು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಂದೂಡಿಕೆ ಮಾಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News