ಮಳೆ ಹಾನಿ ಪರಿಹಾರ ವಿತರಿಸಿದ ಶಾಮನೂರು ಶಿವಶಂಕರಪ್ಪ

Update: 2019-08-24 17:30 GMT

ದಾವಣಗೆರೆ, ಆ.24: ಕಳೆದ ಭಾನುವಾರದಂದು ದಾವಣಗೆರೆಯಲ್ಲಿ ಸುರಿದ ಭಾರೀ ಮಳೆಗೆ ಹಾನಿಯಾದ ಆಸ್ತಿ-ಪಾಸ್ತಿ ನಷ್ಟಕ್ಕೆ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಶನಿವಾರ ಪರಿಹಾರ ಒದಗಿಸಿದರು.

ಇಂದು ತಮ್ಮ ಗೃಹ ಕಚೇರಿ ಶಿವಪಾರ್ವತಿಯಲ್ಲಿ ಸಂತ್ರಸ್ಥರಿಗೆ ಪರಿಹಾರದ ಚೆಕ್ ವಿತರಿಸಿದರು. ಭಾರೀ ಮಳೆಯಿಂದ ಸಾವನ್ನಪ್ಪಿದ ಎಸ್.ಎಂ.ಕೃಷ್ಣ ನಗರದ ವಾಸಿ ಅಶೋಕ್ ಅವರ ಕುಟುಂಬ ವರ್ಗಕ್ಕೆ 5 ಲಕ್ಷ ರೂ. ಗಳ ಪರಿಹಾರದ ಚೆಕ್ ನೀಡಿ ಈ ಹಣವನ್ನು ಮಕ್ಕಳ ಶೈಕ್ಷಣಿಕ ಕಾರ್ಯಕ್ಕೆ ಬಳಸಿ ಎಂದು ಸಲಹೆ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಮಳೆಯಿಂದಾಗಿ 20ಕ್ಕೂ ಹೆಚ್ಚು ಮನೆಗಳು ಬಿದ್ದಿದ್ದು, ಆರು ಮನೆಗಳು ಸಂಪೂರ್ಣ ಜಖಂಗೊಂಡಿದ್ದರೆ, ಇನ್ನುಳಿದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಆ ಮನೆಗಳ ಮಾಲಕರಿಗೂ ಪರಿಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ ಕುಮಾರ್, ಶಿರಸ್ತೆದಾರ್ ರಾಜೇಶ್, ಗ್ರಾಮ ಲೆಕ್ಕಾಧಿಕಾರಿ ಸಂಜಯ್, ಮುಖಂಡ ದುಗ್ಗೇಶ್ ಸೇರಿ ಅನೇಕರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News