ಆರೋಗ್ಯವಾಗಿರಲು ಜೀವನದಲ್ಲಿ ಕ್ರೀಡೆಗಳು ಅವಶ್ಯಕ: ಶಾಸಕ ಆರ್.ನರೇಂದ್ರ

Update: 2019-08-27 18:10 GMT

ಹನೂರು, ಆ.27: ಪ್ರತಿಯೊಬ್ಬರೂ ಉತ್ತಮ ಮಾನಸಿಕ, ದೈಹಿಕ ಹಾಗೂ ಆರೋಗ್ಯವಾಗಿರಲು ಜೀವನದಲ್ಲಿ ಕ್ರೀಡೆಗಳು ಅವಶ್ಯಕ ಎಂದು ಶಾಸಕ ಆರ್.ನರೇಂದ್ರ ರಾಜುಗೌಡ ತಿಳಿಸಿದರು 

ಹನೂರು ಪಟ್ಟಣದ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಸಂತ ಮಾರ್ಗರೇಟ್ ಬಾಲಕಿಯ ಪದವಿ ಪೂರ್ವ ಕಾಲೇಜು ಮತ್ತು ಸಂತ ಆಂತೋಣಿ ಪದವಿ ಪೂರ್ವ ಕಾಲೇಜು ಕೌದಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿಲಾಗಿದ್ದ 2019-20 ಸಾಲಿನ ಹನೂರು ಮತ್ತು ಕೊಳ್ಳೇಗಾಲ ತಾಲೂಕು ಮಟ್ಟದ  ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿ ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ರೂಡಿಸಿಕೂಂಡರೆ ಮಾತ್ರ ಜೀವನದ ಉದ್ದಕ್ಕೂ ಸದಾ ಆರೋಗ್ಯದಿಂದ ಇರುಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಬಸವರಾಜು, ಪ.ಪಂ. ಸದಸ್ಯ ಗಿರೀಶ್, ಹರೀಶ್, ಜಿ.ವಿ ಗೌಡ, ಕಾಲೇಜು ಪ್ರಾಶುಂಪಾಲ ಪ್ರಮೋದ್ ಸೇರಿದಂತೆ ಹಲವರು ಹಾಜರಿದ್ದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News