ಎಲ್ಲವನ್ನು ಎದುರಿಸಲು ನಾವು ಸಿದ್ಧವಾಗಿದ್ದೇವೆ: ಸಂಸದ ಡಿ.ಕೆ.ಸುರೇಶ್
Update: 2019-08-30 13:17 GMT
ಹೊಸದಲ್ಲಿ, ಆ. 30: ನಮ್ಮ ವಿರೋಧಿಗಳಿಗೆ ಸಂತೋಷವಾದರೆ ಅಷ್ಟೇ ಸಾಕು. ಆದರೆ, ಎಲ್ಲವನ್ನು ನಾವು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮಗೆ ಯಾವುದೇ ಆತಂಕವಿಲ್ಲ. ಎಲ್ಲವನ್ನು ಅತ್ಯಂತ ಧೈರ್ಯದಿಂದಲೇ ಎದುರಿಸುತ್ತೇವೆ. ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಆತಂಕ ಬೇಡ ಎಂದು ತಿರುಗೇಟು ನೀಡಿದರು.
ಜಾರಿ ನಿರ್ದೇಶನಾಲಯ(ಇಡಿ) ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ನೀಡಿದ್ದು, ಅದಕ್ಕೆ ನಮ್ಮ ಸಹೋದರ ಉತ್ತರಿಸಲಿದ್ದಾರೆ. ನಮಗೆ ಯಾವುದೇ ಆತಂಕವೂ ಇಲ್ಲ. ಯಾವುದೇ ಹೆದರಿಕೆಯೂ ಇಲ್ಲ ಎಂದು ಡಿ.ಕೆ.ಸುರೇಶ್ ಇದೇ ವೇಳೆ ಸ್ಪಷ್ಟಪಡಿಸಿದರು.