ರೌಡಿ ಶೀಟರ್ ಗೆ ಕಪಾಳಮೋಕ್ಷ ಮಾಡಿದ ಎಸ್.ಪಿ..!

Update: 2019-08-31 15:17 GMT

ಚಾಮರಾಜನಗರ: ಗೌರಿ ಗಣೇಶ ಹಬ್ಬ ಮತ್ತು ಮುಹರ್ರಂ ಹಿನ್ನೆಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್‌ಗಳ ಪರೇಡ್ ನಡೆಸಲಾಯಿತು.

ಚಾಮರಾಜನಗರ ಪೊಲೀಸ್ ಪರೇಡ್‌ ಗ್ರೌಂಡ್ ನಲ್ಲಿ ಎಸ್​ಪಿ ಹೆಚ್.ಡಿ ಆನಂದ್ ಕುಮಾರ್ ನೇತೃತ್ವದಲ್ಲಿ ಪರೇಡ್ ನಡೆಯುತ್ತಿತ್ತು. ಈ ವೇಳೆ ರೌಡಿ ಶೀಟರ್ ಮೊಗವೀರ್ ಸಿಂಗ್‌ಗೆ ಎಸ್​ಪಿ ಹೆಚ್.ಡಿ.ಆನಂದ ಕುಮಾರ್ ಕಪಾಳಮೋಕ್ಷ ಮಾಡಿದ ಘಟನೆ ನಡೆಯಿತು.

ಮೊಗವೀರ್ ಸಿಂಗ್ ಮಸೀದಿ ಮೇಲೆ ಹಂದಿ ಭಾವಚಿತ್ರ ಹಾಕಿ ಅದರ ಫೋಟೋವನ್ನ ಫೇಸ್ ಬುಕ್‌ಗೆ ಅಪ್ಲೋಡ್ ಮಾಡಿದ್ದ. ಈ ಬಗ್ಗೆ ಎಸ್​ಪಿ ಆನಂದ್ ಕುಮಾರ್ ವಿಚಾರಣೆ ನಡೆಸುತ್ತಿದ್ದರು. ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದೇ ಮೊಗವೀರ್ ಸಿಂಗ್ ಹುಸಿ ನಗುತ್ತಿದ್ದ. ಹೀಗಾಗಿ ಕೋಪಗೊಂಡ ಎಸ್​ಪಿ, ಆನಂದ್ ಕುಮಾರ್ ರೌಡಿಗೆ ಕಪಾಳಪೋಕ್ಷ ಮಾಡಿದರು. ಪರೇಡ್‌ನಲ್ಲಿ ಚಾಮರಾಜನಗರ ಜಿಲ್ಲೆಯ 151ಕ್ಕೂ ಹೆಚ್ಚು ರೌಡಿಶೀಟರ್‌ಗಳು ಭಾಗಿಯಾಗಿದ್ದರು.

ಚಾಮರಾಜನಗರದ ಪೋಲಿಸ್ ಕವಾಯತು ಮೈದಾನದಲ್ಲಿ ರೌಡಿ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಗಣೇಶ ಹಬ್ಬದ ವೇಳೆ ಗಲಾಟೆಗಳಲ್ಲಿ ಭಾಗವಹಿಸದಂತೆ ಹಾಗೂ ಯಾವುದೇ ಗಲಾಟೆ ಅಥವಾ ಹಫ್ತಾ ವಸೂಲಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆನಂದ್ ಕುಮಾರ್ ಎಲ್ಲಾ ರೌಡಿಗಳಿಗೂ ಖಡಕ್ ವಾರ್ನಿಂಗ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News