ಗೋಕಾಕ್ ಕ್ಷೇತ್ರದ ಜನತೆ ನನ್ನನ್ನು ನಂಬಿದ್ದಾರೆ: ಮಾಜಿ ಸಚಿವ ಸತೀಶ್ ಜಾರಕಿಹೊಳಿ

Update: 2019-09-08 12:57 GMT

ಬೆಳಗಾವಿ, ಸೆ. 8: ಜಿಲ್ಲೆಯ ಗೋಕಾಕ್ ವಿಧಾನಸಭಾ ಕ್ಷೇತ್ರದ ಜನತೆ ನನ್ನನ್ನು ನಂಬಿದ್ದಾರೆ. ಹೀಗಾಗಿ ನಾನು ಕ್ಷೇತ್ರದ ಜನರಿಗಾಗಿ ಗೋಕಾಕ್ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಮೇಲೆ ವಿಶೇಷವಾದ ಜವಾಬ್ದಾರಿ ಇದ್ದು, ಅದಕ್ಕಾಗಿ ನಾನು ಗೋಕಾಕ್ ಕ್ಷೇತ್ರಕ್ಕೆ ಹೋಗುತ್ತೇನೆ. ರಾಜಕೀಯ ಮಾಡುವುದಕ್ಕಾಗಿ ನಾನು ಕೆಲಸ ಮಾಡುವುದಿಲ್ಲ. ಜನರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗಂಭೀರವಾದ ರಾಜಕಾರಣಿಯಲ್ಲ. ಅವರಿಗೆ ತಮ್ಮ ಸ್ಥಾನದ ಘನತೆ, ಗಂಭೀರತೆಯ ಅವರಿವಿಲ್ಲ ಎಂದು ಲೇವಡಿ ಮಾಡಿದ ಸತೀಶ್ ಜಾರಕಿಹೊಳಿ, ರಮೇಶ್ ರಾಜ್ಯಕ್ಕೆ ದೊಡ್ಡವನಿರಬಹುದು. ಆದರೆ, ನಮ್ಮ ದೃಷ್ಠಿಯಲ್ಲಿ ಅವರು ಸಾಮಾಜಿಕ, ರಾಜಕೀಯ ಶೂನ್ಯ ಎಂದು ಟೀಕಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸಿ ಹೊರಗಡೆ ದೊಡ್ಡ ಹೆಸರು ಮಾಡಿರಬಹುದು. ಆದರೆ, ಇದರಿಂದ ಜನರಿಗೆ ಏನೂ ಉಪಯೋಗವಿಲ್ಲ ಎಂದ ಅವರು, ಲಖನ್-ರಮೇಶ್ ನಡುವೆ ಜಗಳ ಹಚ್ಚಿ ನಾನು ಲಾಭ ಪಡೆಯುತ್ತಿಲ್ಲ. ಇದರಿಂದ ನನಗೇನು ಆಗಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News