ಓ ಮೆಣಸೇ…

Update: 2019-09-08 18:37 GMT

ಸರ್ವ ಜನಾಧರಿತ ರಾಜಕೀಯ ಕಾಂಗ್ರೆಸ್‌ನ ಧ್ಯೇಯವಾಗಿದೆ - ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ
 
ಆರೆಸ್ಸೆಸ್‌ನವರನ್ನೂ ತಬ್ಬಿಕೊಂಡರೆ ಸರ್ವಜನರನ್ನು ಆಧರಿಸಿದಂತಾಗುತ್ತದೆ.

---------------------
 
ಬ್ಯಾಂಕ್ ವಿಲೀನದ ಬಳಿಕ ಒಬ್ಬನೇ ಒಬ್ಬ ನೌಕರನನ್ನು ಕೆಲಸದಿಂದ ತೆಗೆಯುವುದಿಲ್ಲ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
 
ವಿಲೀನಕ್ಕೆ ಮೊದಲೇ ತೆಗೆದು ಆಗಿರಬೇಕು.

---------------------
 
ರಾಹುಲ್ ಗಾಂಧಿ ರಾಜಕೀಯ ಬಾಲಾಪರಾಧಿಯಂತೆ ವರ್ತಿಸುತ್ತಿದ್ದಾರೆ - ಸತ್ಯಪಾಲ್ ಮಲಿಕ್, ಜಮ್ಮು-ಕಾಶ್ಮೀರದ ರಾಜ್ಯಪಾಲ
  ತಾವೇಕೆ ಕಾಶ್ಮೀರದ ಜೈಲರ್ ಥರ ವರ್ತಿಸುತ್ತಿದ್ದೀರಿ?
---------------------
 
ನಾನು ದ್ವೇಷ ರಾಜಕಾರಣದ ಬಲಿಪಶು - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
 
ನಾನಲ್ಲ, ನಾನಲ್ಲ ಎಂದರಂತೆ ಸಿದ್ದರಾಮಯ್ಯ.

---------------------
 
ಹಿಂದೂ-ಮುಸ್ಲಿಮರ ನಡುವಿನ ಪ್ರೀತಿ, ವಿಶ್ವಾಸ ಈ ಜಿಲ್ಲೆಯಲ್ಲಿ ಇನ್ನೂ ಇದೆ - ನಳಿನ್ ಕುಮಾರ್ ಕಟೀಲು, ಸಂಸದ
 
ಹೌದು, ಯಾರು ಎಷ್ಟೇ ಬೆಂಕಿ ಕೊಟ್ಟರೂ ಮತ್ತೆ ಚಿಗುರುವ ಶಕ್ತಿ ಅದಕ್ಕಿದೆ.

---------------------
 
ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ನಾಯಿಯೂ ಮೂಸುವುದಿಲ್ಲ - ಪದ್ಮನಾಭ ಪ್ರಸನ್ನ, ಕೆಜೆಪಿ ರಾಜ್ಯಾಧ್ಯಕ್ಷ
  ಸದ್ಯಕ್ಕೆ ಹಾಗಾದರೆ ಬಿಜೆಪಿಯನ್ನು ನಾಯಿ ಮೂಸುತ್ತಿದೆ ಎಂದಾಯಿತು.
---------------------
 
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಎಲ್ಲ 13 ಅಣೆಕಟ್ಟೆಗಳು ಭರ್ತಿಯಾಗಿವೆ - ವಿ.ಸೋಮಣ್ಣ, ಸಚಿವ
  ಯಡಿಯೂರಪ್ಪ ಅವರೇ ಬಾವಿಯಿಂದ ಸೇದಿ ಅಣೆಕಟ್ಟೆಗಳನ್ನು ಭರ್ತಿ ಮಾಡಿದ್ದಂತೆ.
---------------------
 
ಡಿಕೆಶಿ ಬಂಧನದಿಂದ ನನಗೆ ಸಂತೋಷವಾಗಿಲ್ಲ - ಯಡಿಯೂರಪ್ಪ, ಮುಖ್ಯಮಂತ್ರಿ,
  ತಮ್ಮ ಬಂಧನವೂ ಯಾವತ್ತಾದರೂ ಆಗಬಹುದು ಎಂಬ ಭಯವೇ?
---------------------
 
ದೇಶದ ಎಲ್ಲಾ ನದಿಗಳನ್ನು ಸ್ವಚ್ಛಗೊಳಿಸಬೇಕಿದೆ - ಶೋಭಾಕರಂದ್ಲಾಜೆ, ಸಂಸದೆ
 
ಮೊದಲು ರಾಜಕಾರಣಿಗಳು ತಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಅಗತ್ಯವಿದೆ.

---------------------
 
ಯಾರೋ ಮಹಿಳೆಯರು ಹೇಳಿದರೆಂದು ಮದ್ಯ ನಿಷೇಧ ಮಾಡಲು ಆಗಲ್ಲ - ಎಚ್. ನಾಗೇಶ್, ಸಚಿವ
  ಅಂದರೆ ನಿಮ್ಮ ಮನೆಯ ಮಹಿಳೆಯರೇ ಹೇಳಬೇಕೇ?
---------------------
 
ಪ್ರಧಾನಿ ಮೋದಿ ಜತೆ ಧೈರ್ಯದಿಂದ ಮಾತನಾಡ ಬಲ್ಲ, ವಾದ ಮಾಡಬಲ್ಲ ನಾಯಕತ್ವ ಭಾರತಕ್ಕೆ ಅಗತ್ಯವಿದೆ - ಮುರಳಿ ಮನೋಹರ ಜೋಷಿ, ಬಿಜೆಪಿ ಮುಖಂಡ
  ಅವರು ಭಾರತದ ಶತ್ರುರಾಷ್ಟ್ರದ ಪ್ರಧಾನಿಯೇ?
---------------------
 
ಏಕ ಭಾರತ-ಏಕ ಚುನಾವಣೆ ಪರಿಕಲ್ಪನೆಗೆ ಚುನಾವಣಾ ಆಯೋಗ ಸಿದ್ಧವಿದೆ - ಸುನಿಲ್ ಅರೋರ, ಕೇಂದ್ರ ಚುನಾವಣಾ ಆಯೋಗದ ಆಯುಕ್ತ
  ಜನರು ಸಿದ್ಧರಾಗುವ ಅಗತ್ಯವಿಲ್ಲವೇ?
---------------------
 
ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ವಿಶ್ವದಲ್ಲೇ ಅಪಾಯಕಾರಿ ರಾಷ್ಟ್ರ - ಜಿಮ್ ಮ್ಯಾಟಿಸ್, ಅಮೆರಿಕದ ಮಾಜಿ ರಕ್ಷಣಾ ಸಚಿವ
  ಅಮೆರಿಕ ಅಣ್ವಸ್ತ್ರವನ್ನೇ ಹೊಂದಿಲ್ಲವೇ?
---------------------
 
ಆಡಳಿತ ಪಕ್ಷದ ಮೇಲೆ ದ್ವೇಷ ರಾಜಕರಣದ ಆರೋಪ ಬರುವುದು ಸಹಜ - ಈಶ್ವರಪ್ಪ, ಸಚಿವ
  ತಾವು ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ದ್ವೇಷ ರಾಜಕಾರಣ ಯಾವುದರ ವ್ಯಾಪ್ತಿಯಲ್ಲಿ ಬರುತ್ತದೆ?
---------------------
 
ಜೆಡಿಎಸ್ ಪಕ್ಷವು ಮುಖಂಡರನ್ನು ತಯಾರಿಸುವ ಕಾರ್ಖಾನೆಯಾಗಿದೆ - ಎಚ್.ಡಿ. ರೇವಣ್ಣ, ಮಾಜಿ ಸಚಿವ
 
ಆ ಕಾರ್ಖಾನೆಯ ಒಡೆತನ ಮಾತ್ರ ದೇವೇಗೌಡರ ಕೈಯಲ್ಲಿದೆ.

---------------------
 
ಜವಾಹರಲಾಲ್ ನೆಹರೂ ಕೂಡ 370ನೇ ವಿಧಿ ರದ್ದು ಗೊಳ್ಳುವುದನ್ನು ಬಯಸಿದ್ದರು - ಶಶಿ ತರೂರು, ಕಾಂಗ್ರೆಸ್ ಮುಖಂಡ
  ರದ್ದುಗೊಳಿಸುವುದಕ್ಕೆ ಬಯಸಿದ್ದಿದ್ದರೆ ಅದನ್ನು ಅಲ್ಲಿ ಜಾರಿಗೊಳಿಸಿದ್ದು ಯಾಕೆ?
---------------------
 
ನೆರೆ ಸಂತ್ರಸ್ತರ ಗಂಜಿ ಕೇಂದ್ರಗಳಿಗೆ ಮುಂದಿನ ದಿನಗಳಲ್ಲಿ ಕಾಳಜಿ ಕೇಂದ್ರಗಳೆಂದು ಮರು ನಾಮಕರಣ ಮಾಡಲಾಗುವುದು - ಆರ್. ಅಶೋಕ್, ಸಚಿವ
 
ಅಂದರೆ ಇನ್ನು ಮುಂದೆ ಕೇಂದ್ರದಲ್ಲಿ ಗಂಜಿ ಸಿಗುವುದಿಲ್ಲ, ಬರೇ ಕಾಳಜಿ ಮಾತ್ರ.

---------------------
 
ಭಾರತದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಗೆ ರಶ್ಯವೂ ಕಾರಣ - ನರೇಂದ್ರ ಮೋದಿ, ಪ್ರಧಾನಿ
  ಕಮ್ಯುನಿಸ್ಟರನ್ನು ಹುಲಿಗೆ ಹೋಲಿಸುತ್ತಿರಬೇಕು.
---------------------
 
ನಾನು ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಅನುಭವಿಸುತ್ತಿದೆ - ಜಿ.ಟಿ. ದೇವೇಗೌಡ, ಮಾಜಿ ಸಚಿವ
  ಅದಕ್ಕಾಗಿ ಇದೀಗ ಇನ್ನೊಬ್ಬರಿಗೆ ನೋವು ಕೊಟ್ಟು ಸೇಡು ತೀರಿಸಿಕೊಳ್ಳುತ್ತಿದ್ದೀರಾ?
---------------------
 
ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಇಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ
 
ಈ ರೀತಿ ದಂಡ ಹಾಕುತ್ತಿದ್ದರೆ ನಿಷೇಧ ಮಾಡುವ ಅಗತ್ಯವೇ ಇಲ್ಲ.

---------------------
   
ಭಾರತೀಯರ ಹೃದಯ ಕಮಲ ಅರಳಬೇಕಾದರೆ ಸಂಸ್ಕೃತ ಭಾಷೆ ಅಗತ್ಯ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
 
ಒಟ್ಟಿನಲ್ಲಿ ಕಮಲವನ್ನು ಅರಳಿಸುವುದೇ ಸಂಸ್ಕೃತ ಭಾಷೆಯ ಗುರಿ.

---------------------
 
ಸೋನಿಯಾ ಗಾಂಧಿ ನೇತೃತ್ವದ ಇಟಾಲಿಯನ್ ಕಾಂಗ್ರೆಸ್ ಮತ್ತೊಂದು ಈಸ್ಟ್ ಇಂಡಿಯನ್ ಕಂಪೆನಿ ಆಗಿದೆ - ಸುರೇಶ್ ಅಂಗಡಿ, ಸಚಿವ
 
ರಿಲಯನ್ಸ್ ಕಂಪೆನಿಗಿಂತ ವಾಸಿ ಎನ್ನುತ್ತಿದ್ದಾರೆ ಜನ.

---------------------
 
ಇಡೀ ಜಗತ್ತೇ ಒಂದು ಕುಟುಂಬ ಎಂದು ಭಾರತ ನಂಬಿದೆ - ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
  ಆದರೆ ದಲಿತರನ್ನು ಬಿಟ್ಟು ಎನ್ನುವುದನ್ನು ಕಂಸದೊಳಗೆ ಸೇರಿಸಲಾಗಿದೆ.
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...