“ನಿನ್ನ ಕತ್ತನ್ನು ಕತ್ತರಿಸುತ್ತೇನೆ”: ಕೈಯಲ್ಲಿ ಕೊಡಲಿ ಹಿಡಿದು ಬಿಜೆಪಿ ಮುಖಂಡನಿಗೆ ಹರ್ಯಾಣ ಸಿಎಂ ಖಟ್ಟರ್ ಬೆದರಿಕೆ

Update: 2019-09-11 11:10 GMT

ಹೊಸದಿಲ್ಲಿ, ಸೆ.11: ಕೈಯಲ್ಲಿ ಕೊಡಲಿ ಹಿಡಿದು ಬಿಜೆಪಿ ಮುಖಂಡರೊಬ್ಬರಿಗೆ “ನಿನ್ನ ಕತ್ತು ಕತ್ತರಿಸುತ್ತೇನೆ” ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬೆದರಿಕೆ ಒಡ್ಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮನೋಹರ್ ಲಾಲ್ ಖಟ್ಟರ್ ಕೈಯಲ್ಲಿ ಕೊಡಲಿ ಹಿಡಿದು, “ಈ ಕೊಡಲಿ ಶತ್ರುಗಳನ್ನು ನಾಶಮಾಡಲು” ಎಂದು ಹೇಳುವುದು ಕೇಳಿಸುತ್ತದೆ. ಈ ಸಂದರ್ಭ ಖಟ್ಟರ್ ಹಿಂದೆ ನಿಂತಿದ್ದ ಬಿಜೆಪಿ ನಾಯಕರೊಬ್ಬರು ಖಟ್ಟರ್ ಗೆ ಸಾಂಪ್ರದಾಯಿಕ ಟೋಪಿ ತೊಡಿಸಲು ಮುಂದಾದರು. ಈ ಸಂದರ್ಭ ಕೋಪಗೊಂಡ ಖಟ್ಟರ್ ಹಿಂದೆ ತಿರುಗಿ, “ನಿನ್ನ ಕತ್ತನ್ನು ಕತ್ತರಿಸುತ್ತೇನೆ” ಎಂದು ಹೇಳಿದ್ದಾರೆ.

“ನೀನೇನು ಮಾಡುತ್ತಿದ್ದಿ? ನಿನ್ನ ಕತ್ತನ್ನು ಕತ್ತರಿಸುತ್ತೇನೆ” ಎಂದು ಖಟ್ಟರ್ ಹೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಇದರಿಂದ ಹೆದರಿದ ಬಿಜೆಪಿ ನಾಯಕ ಕೈಮುಗಿದು ಖಟ್ಟರ್ ರಲ್ಲಿ ಕ್ಷಮೆಯಾಚಿಸುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News