ಕೇಂದ್ರದ ಬಳಿ ಪರಿಹಾರ ನೀಡಲು ಹಣವಿಲ್ಲವೇ?: ಜೆಡಿಎಸ್ ಪ್ರಶ್ನೆ
Update: 2019-09-12 17:26 GMT
ಬೆಂಗಳೂರು, ಸೆ.12: ಉತ್ತರ ಕರ್ನಾಟಕ ಇತ್ತೀಚಿನ ದಶಕಗಳಲ್ಲಿ ಕಂಡು ಕೇಳರಿಯದಂತಹ ಭೀಕರ ಪ್ರವಾಹಕ್ಕೆ ಸಿಲುಕಿ ಬಳಲಿದೆ. ಇಂತಹ ಕಷ್ಟದಲ್ಲೂ ಕೇಂದ್ರ ಸರಕಾರ ಯಾವುದೇ ಪರಿಹಾರ ಘೋಷಣೆ ಮಾಡದೆ ಇರುವುದು ದುರಾದೃಷ್ಟಕರ. ಕೇಂದ್ರ ಸರಕಾರಕ್ಕೆ ರಾಜ್ಯಕ್ಕೆ ಪರಿಹಾರ ಕೊಡುವ ಮನಸ್ಸಿಲ್ಲವೋ ಅಥವಾ ಪರಿಹಾರ ನೀಡಲು ಕೇಂದ್ರದ ಬಳಿ ಹಣವೇ ಇಲ್ಲವೋ ಎಂದು ಜೆಡಿಎಸ್ ಟ್ವೀಟ್ ಮಾಡಿ ಪ್ರಶ್ನಿಸಿದೆ.