ಭಾಷೆ ಹೇರಿಕೆ ಬಗ್ಗೆ ಅಮಿತ್ ಶಾಗೆ ಮನವರಿಕೆ ಮಾಡಿಕೊಡುತ್ತೇವೆ: ಸಂಸದ ಉಮೇಶ್ ಜಾಧವ್

Update: 2019-09-15 17:39 GMT

ಕಲಬುರಗಿ, ಸೆ.15: ಯಾರೂ ಯಾವುದೇ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು. ಈ ಬಗ್ಗೆ ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. 

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅವರು ಬೇರೆ ಭಾಷೆ ಬೇಡವೆಂದು ಹೇಳಿಲ್ಲ. ಒಂದು ದೇಶ-ಒಂದು ಭಾಷೆ ಎಂದು ಅವರು ಹೇಳಿದ್ದರೂ ಅದನ್ನು ಪೂರ್ತಿಯಾಗಿ ಓದಬೇಕು, ನೋಡಬೇಕು. ಈಗ ಪ್ರಪಂಚದ್ಯಾಂತ ಇಂಗ್ಲಿಷ್ ಸಾಮಾನ್ಯ ಭಾಷೆ ಆಗಿದೆ. ದೇಶದಲ್ಲಿ ಹಿಂದಿ ಇರಲಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅಲ್ಲದೆ, ಭಾಷೆಯನ್ನು ಬಲವಂತವಾಗಿ ಯಾರ ಮೇಲೂ ಹೇರಬಾರದು. ಈ ಬಗ್ಗೆ ನಾವು ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News