ಸರ್ಕಾರಿ ಶಾಲೆಯ ಸಿಲಿಂಡರ್, ಅಕ್ಕಿ ಹೊತ್ತೊಯ್ದ ಕಳ್ಳರು
Update: 2019-09-17 18:29 GMT
ಶಿವಮೊಗ್ಗ, ಸೆ. 17: ಸರ್ಕಾರಿ ಶಾಲೆಯ ಬಿಸಿಯೂಟ ತಯಾರಿಸುವ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸಿಲಿಂಡರ್, ದವಸಧಾನ್ಯ, ಪಾತ್ರೆ ಅಪಹರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಗೋಪಾಲಗೌಡ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಎರಡು ಸಿಲಿಂಡರ್, 64 ಕೆ.ಜಿ. ಊಟದ ಅಕ್ಕಿ, 3 ಪ್ಯಾಕ್ ಅಡುಗೆ ಎಣ್ಣೆ, 2 ಸ್ಟೀಲ್ ಡಬ್ಬಗಳು, ಒಂದು ಪ್ಲಾಸ್ಟಿಕ್ ಕುರ್ಚಿಯನ್ನು ಕಳ್ಳರು ಅಪಹರಿಸಿದ್ದಾರೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರು ನೀಡಿದ ದೂರಿನ ಆಧಾರದ ಮೇಲೆ, ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.