ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ, ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

Update: 2019-09-18 12:30 GMT

ಬೆಂಗಳೂರು, ಸೆ.18: ಮುಸ್ಲಿಮರ ಮತ ಪಡೆಯುವ ಶಾಸಕರು ಹಿಜಡಾಗಳೆಂದು ಹೇಳಿರುವ ಸಚಿವ ಕೆ.ಎಸ್.ಈಶ್ವರಪ್ಪ ಸಂಸ್ಕೃತಿ ಇಲ್ಲದ ಮನುಷ್ಯ. ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿರುವವರು ಸಂಸದೀಯ ಭಾಷೆ ಬಳಸಬೇಕೆ ಹೊರತು ಕೆಟ್ಟ ಪದಗಳನ್ನು ಪ್ರಯೋಗ ಮಾಡಬಾರದು. ಜನತೆ ನಮ್ಮನ್ನು ಗಮನಿಸುತ್ತಿರುತ್ತಾರೆಂಬ ಕನಿಷ್ಠ ಜ್ಞಾನವಿಲ್ಲವೆಂದು ಖಂಡಿಸಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆ.ಎಸ್.ಈಶ್ವರಪ್ಪ ಮುಂದಾದರು ಸಂಸದೀಯ ಭಾಷೆಗಳನ್ನು ಬಳಸಲಿ. ಬಿಜೆಪಿಗೆ ಮತ ಹಾಕದವರು ಪಾಕಿಸ್ತಾನದವರು ಎನ್ನುತ್ತಾರೆ. ಇವರ ಭಾಷೆ ಸಚಿವ ಸ್ಥಾನಕ್ಕೆ ಸರಿಹೊಂದುತ್ತದೆಯೇ ಎಂದು ಅವರು ತಿಳಿಸಿದರು.

ಈ ಕುರಿತು ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮುಸ್ಲಿಮ್ ಮತ ಪಡೆಯುವವರು ಹಿಜಡಾಗಳೆಂದು ಹೇಳಿರುವ ಕೆ.ಎಸ್.ಈಶ್ವರಪ್ಪಗೆ, ಆ ಸಮುದಾಯದವರೇ ತಕ್ಕ ಉತ್ತರ ನೀಡಬೇಕು. ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಹತಾಶೆಯಾಗಿರುವ ಅವರಿಗೆ ಬಿಜೆಪಿ ನಾಯಕರನ್ನು ಟೀಕಿಸುವುದಕ್ಕೆ ಧೈರ್ಯವಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News