ಮಂಡ್ಯ: ಬ್ಯಾಂಕ್ ಜನರೇಟರ್ ಗೆ ಬೆಂಕಿ; ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರು
Update: 2019-09-19 18:05 GMT
ಮಂಡ್ಯ, ಸೆ.19: ನಗರದ ವಿವೇಕಾನಂದ ಜೋಡಿ ರಸ್ತೆಯಲ್ಲಿನ ಮಾಕಂ ಟವರ್ ನಲ್ಲಿರುವ ಆಕ್ಸಿಸ್ ಬ್ಯಾಂಕ್ನ ಜನರೇಟರ್ ಗುರುವಾರ ಮಧ್ಯಾಹ್ನ ಭಸ್ಮವಾಗಿದ್ದು, ಟವರ್ ನ ಕಚೇರಿಗಳಲ್ಲಿದ್ದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ಯಾಂಕ್ನ ನೆಲಮಾಳಿಗೆಯಲ್ಲಿಡಲಾಗಿದ್ದ ಜನರೇಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡವನ್ನು ಹೊಗೆ ಆವರಿಸಿತು. ಕಟ್ಟಡದಲ್ಲಿದ್ದ ಆಕ್ಸಿಸ್ ಬ್ಯಾಂಕ್, ವಿಜಯಾ ಬ್ಯಾಂಕ್ ಪ್ರಾದೇಶಿಕ ಕಚೇರಿ, ಲೀಡ್ ಬ್ಯಾಂಕ್, ಡಯಾಗ್ನೋಸ್ಟಿಕ್ ಸೆಂಟರ್ ನ ಸಿಬ್ಬಂದಿ ಹೊರಗೋಡಿ ಬಂದರು.
ದಟ್ಟ ಹೊಗೆ ಕಟ್ಟಡದ ಹೊರಭಾಗದಲ್ಲೂ ಆವರಿಸಿಕೊಂಡಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಅನಾಹುತ ತಪ್ಪಿಸಿದರು.
ಸಿಪಿಐ ವಿವೇಕಾನಂದ, ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.