ಸಾಲಬಾಧೆ: ರೈತ ಮಹಿಳೆ ಆತ್ಮಹತ್ಯೆ
Update: 2019-09-20 17:18 GMT
ಮಂಡ್ಯ, ಸೆ.20: ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಮಹಿಳೆ ಶುಕ್ರವಾರ ಮುಂಜಾನೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಶಿವಣ್ಣ ಅವರ ಪತ್ನಿ ಸಾವಿತ್ರಮ್ಮ(43) ಮೃತ ಮಹಿಳೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. 19 ಗುಂಟೆ ಜಮೀನಲ್ಲಿ ಭತ್ತ, ಕಬ್ಬು ಇತರೆ ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದರು.
ಕೃಷಿ ಚಟುವಟಿಕೆಗಾಗಿ ಬೆಸಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 20 ಸಾವಿರ ಬೆಳೆ ಸಾಲ, 27 ಸಾವಿರಕ್ಕೆ ಚಿನ್ನಾಭರಣ ಗಿರಿವಿ, ಖಾಸಗಿ ಪೈನಾಸ್ಸ್ ಕಂಪನಿಯಲ್ಲಿ 42 ಸಾವಿರ, ಸರ್ವೋದಯ ಮೈಕ್ರೋ ಪೈನಾಸ್ಸ್ ನಲ್ಲಿ 30 ಸಾವಿರ, 4 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು. ಆದರೆ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು.