"ಬಿಜೆಪಿಯವರು ಕರ್ನಾಟಕದ ಉತ್ತರ ಕುಮಾರರು"

Update: 2019-09-21 14:42 GMT

ಬೆಂಗಳೂರು, ಸೆ.21: ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥತೆ, ಸಂವೇದನೆಯನ್ನು ತೋರಿರುವ ಇವರುಗಳು ಕರ್ನಾಟಕದ ಉತ್ತರ ಕುಮಾರರೆ ಸರಿ ಎಂದು ಬಿಜೆಪಿ ನಾಯಕರನ್ನು ಟ್ವೀಟರ್‌ನಲ್ಲಿ ಟೀಕಿಸಿರುವ ಕಾಂಗ್ರೆಸ್, ಅವರು ನೀಡಿರುವ ಹೇಳಿಕೆಗಳನ್ನು ಟ್ವಿಟ್‌ನಲ್ಲಿ ಪಟ್ಟಿ ಮಾಡಿದೆ.

"ನೋಟ್‌ಪ್ರಿಂಟ್ ಮಾಡುವ ಮೆಷಿನ್ ಇಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ, 10 ಸಾವಿರ ರೂ.ಕೊಟ್ಟಿದ್ದೇ ಹೆಚ್ಚಾಯ್ತು-ಸಚಿವ ಕೆ.ಎಸ್.ಈಶ್ವರಪ್ಪ, ಶಾಲಾ ಮಕ್ಕಳು ದೇಣಿಗೆ ಸಂಗ್ರಹಿಸಬೇಕು- ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್ ಹಾಗೂ ಕೇಂದ್ರದ ಮೊರೆ ಹೋಗುವ ಅಗತ್ಯವಿಲ್ಲ-ಸಂಸದ ತೇಜಸ್ವಿ ಸೂರ್ಯ" ಎಂದು ಟ್ವಿಟ್‌ನಲ್ಲಿ ಪಟ್ಟಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News