ಶಿಕ್ಷಕರ ವರ್ಗಾವಣೆ ತಾತ್ಕಾಲಿಕ ಸ್ಥಗಿತ

Update: 2019-09-24 17:32 GMT

ಬೆಂಗಳೂರು, ಸೆ.24: ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗಳನ್ನು ಚುನಾವಣಾ ಆಯೋಗದ ಅನುಮತಿವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.

ವರ್ಗಾವಣೆ ಕೌನ್ಸಿಲಿಂಗ್ ಹಾಗೂ ಇತರೆ ಪೂರಕ ಪ್ರಕ್ರಿಯೆಗಳನ್ನು ಪ್ರಸ್ತುತ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಹಿನ್ನೆಯಲ್ಲಿ ಮಾದರಿ ನೀತಿ ಸಂಹಿತೆ ಪ್ರಕಟಿಸಿರುವುದರಿಂದ ಪ್ರಸ್ತುತ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಲು ಬಗ್ಗೆ ಮೌಖಿಕವಾಗಿ ಸ್ಪಷ್ಠೀಕರಣ ಕೋರಲಾಗಿದೆ. ಕೇಂದ್ರ ಚುನಾವಣಾ ಆಯೋಗವು ಲಿಖಿತವಾಗಿ ಸ್ಪಷ್ಠೀಕರಣ ಕೋರಲು ಹಾಗೂ ಸ್ಪಷ್ಠೀಕರಣ ನೀಡುವವರೆಗೂ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸೂಚಿಸಿರುವುದರಿಂದ, ಲಿಖಿತವಾಗಿ ವರ್ಗಾವಣಾ ಪ್ರಕ್ರಿಯೆ ಮುಂದುವರಿಸಲು ಆಯೋಗವನ್ನು ಕೋರಲಾಗಿದೆ.

ಚುನಾವಣಾ ಆಯೋಗದಿಂದ ಲಿಖಿತವಾಗಿ ಅನುಮತಿ ಸಿಕ್ಕಿದ ಕೂಡಲೇ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News