ಮಗನಿಗೆ ಸಿಗದ ಕೆಲಸ: ಆತ್ಮಹತ್ಯೆಗೆ ಶರಣಾದ ತಂದೆ

Update: 2019-09-26 18:07 GMT

ಶಿವಮೊಗ್ಗ, ಸೆ. 26: ಮಗನಿಗೆ ಸೂಕ್ತ ಕೆಲಸ ಸಿಗದಿದ್ದರಿಂದ ಬೇಸರಗೊಂಡು ತಂದೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆಯಲ್ಲಿ ನಡೆದಿದೆ. 

ವೀರಣ್ಣ (50) ಆತ್ಮಹತ್ಯೆಗೆ ಶರಣಾದ ತಂದೆ ಎಂದು ಗುರುತಿಸಲಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಮಗನಿಗೆ ಕೆಲಸ ಕೊಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ತೀವ್ರ ಮನನೊಂದಿದ್ದ ವೀರಣ್ಣರವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News