ಕೊಪ್ಪದಲ್ಲಿ 'ಪ್ಲಾಸ್ಟಿಕ್ ಶವ ಯಾತ್ರೆ'
Update: 2019-09-27 13:01 GMT
ಕೊಪ್ಪ, ಸೆ.27: ಕೊಪ್ಪ ಪಟ್ಟಣ ಪಂಚಾಯತ್, ತಾಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳು ಪಟ್ಟಣದ ಪುರಭವನದಿಂದ ಬಸ್ ನಿಲ್ದಾಣ ಮಾರ್ಗವಾಗಿ ಮಾರ್ಕೆಟ್ ರಸ್ತೆ ಮೂಲಕ 'ಪ್ಲಾಸ್ಟಿಕ್ ಅಂತಿಮ ಯಾತ್ರೆ, ಪ್ಲಾಸ್ಟಿಕ್ ಶವಯಾತ್ರೆ' ಎಂಬ ಘೋಷವಾಕ್ಯದಡಿಯಲ್ಲಿ ಜಾಥ ನಡೆಸಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ತಹಶೀಲ್ದಾರ್ ಏರ್ರಿಸ್ವಾಮಿ ಚಾಲನೆ ನೀಡಿದರು. ತಾ.ಪಂ ಅಧ್ಯಕ್ಷೆ ಜಯಂತಿ ನಾಗರಾಜ್, ಪ.ಪಂ ಸದಸ್ಯರಾದ ರೇಖಾ, ಇಸ್ಮಾಯಿಲ್, ಸುಬ್ರಮಣ್ಯ ಶೆಟ್ಟಿ, ಮೈತ್ರಾ, ರಶೀದ್, ಹೇಮಾವತಿ, ಸುಜಾತ, ಗಾಯತ್ರಿ ವಸಂತ್, ಗಾಯತ್ರಿ ಅಣ್ಣಪ್ಪ, ಪ.ಪಂ ಸಿ.ಒ ಬಸವರಾಜ್, ಬಿ.ಇ.ಒ ಗಣಪತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.