ಹಾಸನ: ಇಸುಝು ಸಾಲದಾತರು, ಗ್ರಾಹಕರ ಮೇಳ

Update: 2019-09-30 11:38 GMT

ಹಾಸನ : ಇಸುಝು ಮೋಟರ್ಸ್ ಪ್ರೈ.ಲಿ. ವತಿಯಿಂದ ಸಾಲದಾತರು ಮತ್ತು ಗ್ರಾಹಕರ ಮೇಳವು ಹಾಸನದ ಹೋಟೆಲ್ ಮಯೂರ ಇಂಟರ್‌ನ್ಯಾಶನಲ್‌ನಲ್ಲಿ ಶುಕ್ರವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಇಸುಝು ಮೋಟರ್ಸ್ ಇಂಡಿಯಾದ ಅಮಿತಾಬ್ ಸಿಂಗ್ ಮತ್ತು ನಂದಕುಮಾರ್ ಕೆ., ಕಾವೇರಿ ಇಸುಝುನ ಹಿರಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೆಟ್ಟಿ, ಸೇಲ್ಸ್ ಮ್ಯಾನೇಜರ್ ಸಂಪತ್ ಮಾಡ, ಟೀಮ್ ಲೀಡರ್ ಈಶ್ವರ್, ಬ್ಯುಸಿನೆಸ್ ಡೆವೆಲಪ್ಮೆಂಟ್ ಅಧಿಕಾರಿ ದರ್ಶನ್ ಹಾಗೂ ಸುಂದರಮ್ ಫೈನಾನ್ಸ್, ಚೋಲಾ ಫೈನಾನ್ಸ್, ಮ್ಯಾಗ್ಮ ಫಿನ್‌ಕಾರ್ಪ್, ಶ್ರೀರಾಮ ಫೈನಾನ್ಸ್‌ ನಿಯೋಗದ ಸದಸ್ಯರು ಮತ್ತು ಇಸುಝುನ ಸಂಭಾವ್ಯ ಮತ್ತು ಹಾಲಿ ಗ್ರಾಹಕರು ಉಪಸ್ಥಿತರಿದ್ದರು.

ರಾಜೇಶ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಾಹನಗಳ ತಯಾರಿಕಾ ಕ್ಷೇತ್ರದಲ್ಲಿ ಬ್ರಾಂಡ್ ಇಸುಝುನ 1916ರಿಂದ ಇಲ್ಲಿಯವರೆಗಿನ ಪ್ರಯಾಣದ ಕುರಿತು ಸಾಲದಾತರಿಗೆ ವಿವರಿಸಲಾಯಿತು. ಇದರಿಂದಾಗಿ ಜಗತ್ತಿನಾದ್ಯಂತ ಇಸುಝುನ ವ್ಯವಹಾರ ವರ್ತುಲ ಮತ್ತು ಮಾರುಕಟ್ಟೆಯ ಮೇಲಿನ ಪ್ರಾಬಲ್ಯದ ಬಗ್ಗೆ ಅವರಿಗೆ ಮಾಹಿತಿ ದೊರೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News