ಸಂಸದ ಪ್ರತಾಪ್ ಸಿಂಹ ಆಡಿರುವ ಭಾಷೆ ಖಂಡನೀಯ: ಮಾಜಿ ಸಂಸದ ಆರ್.ಧ್ರುವನಾರಾಯಣ್

Update: 2019-09-28 18:04 GMT

ಮೈಸೂರು, ಸೆ.28: ಮಹಿಷ ದಸರಾ ನಿಲ್ಲಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ಆಡಿರುವ ಭಾಷೆ ಅವರ ಘನತೆಗೆ ಧಕ್ಕೆ ತರುವುದಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಖಂಡಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾನಾಡಿದ ಅವರು, ಪ್ರಗತಿಪರರು, ಸಾಹಿತಿಗಳು, ಮೂಲನಿವಾಸಿಗಳು ಅವರದೇ ಸಂಸ್ಕೃತಿಯನ್ನು ಬೆಳೆಸಲು ಮಹಿಷ ದಸರಾ ಆಚರಣೆ ಮಾಡುತ್ತಿದ್ದರು. ಕಳೆದ ಎಂಟು ವರ್ಷಗಳಿಂದ ಆಚರಣೆ ಮಾಡುತ್ತಿರುವ ಇವರು ಯಾವುದೇ ಶಾಂತಿ ಭಂಗವನ್ನು ಉಂಟು ಮಾಡಿರಲಿಲ್ಲ. ಆದರೆ ಸಂಸದ ಪ್ರತಾಪ್ ಸಿಂಹ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿ ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಬ್ಬ ಜವಾಬ್ದಾರಿಯುತ ಸಂಸದನಾಗಿ ಬಳಸಿರುವ ಪದ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ, ಮೊದಲು ನಮ್ಮ ಭಾಷೆ ಮೇಲೆ ಹಿಡಿತವಿರಬೇಕು. ಬಾಯಿ ಇದೆ ಎಂದು ಏನೇನೋ ಮಾತನಾಡುವುದಲ್ಲ ಎಂದ ಅವರು, ಸರಕಾರ ಮೂಲನಿವಾಸಿಗಳ ಹಬ್ಬವನ್ನು ಆಚರಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News