ಪ್ರತಾಪ್ ಸಿಂಹ ಮಾತ್ರವಲ್ಲ, ಭಾಷೆ ಬಳಸುವಾಗ ಎಲ್ಲರಿಗೂ ಜ್ಞಾನ ಇರಬೇಕು: ಡಿಸಿಎಂ ಕಾರಜೋಳ

Update: 2019-10-02 17:03 GMT

ಬಾಗಲಕೋಟೆ, ಅ.2: ಭಾಷೆ ಬಳಸುವಾಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತ್ರವಲ್ಲ, ಎಲ್ಲರಿಗೂ ಜ್ಞಾನ ಇರಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ, ಭಾಷೆ ಬಳಸುವಾಗ ಎಚ್ಚರ ವಹಿಸಬೇಕು. ಮನಬಂದಂತೆ ಮಾತನಾಡಬಾರದು ಎಂದು ಪರೋಕ್ಷವಾಗಿ ಪ್ರತಾಸ್ ಸಿಂಹ ಅವರಿಗೆ ಎಚ್ಚರಿಸಿದರು.

ಕೇಂದ್ರ ಸರಕಾರದ ಪರಿಹಾರ ಅಗತ್ಯವಿಲ್ಲ ಎಂದಿರುವ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರದಿಂದ ನಮಗೆ ಹೆಚ್ಚಿನ ಪರಿಹಾರ ಸಿಗಬೇಕು. ಕಾನೂನಾತ್ಮಕವಾಗಿ ಅಲ್ಲದೇ, ಹೆಚ್ಚಿನ ತೊಂದರೆ ಇರುವುದರಿಂದ ಪರಿಹಾರ ಸಿಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News