ಸೋಮವಾರಪೇಟೆ: ಯುವಕನ ಕೊಲೆ

Update: 2019-10-09 13:22 GMT

ಸೋಮವಾರಪೇಟೆ: ಬಿಹಾರ ಮೂಲದ ಯುವಕನನ್ನು ಕಡಿದು ಕೊಲೆ ಮಾಡಿ ಮೃತದೇಹವನ್ನು ಕಾಫಿ ತೋಟದಲ್ಲಿ ಎಸೆದಿರುವ ಘಟನೆ ತಾಲೂಕಿನ ಮಾದಾಪುರ ಸಮೀಪದ ಜಂಬೂರಿನಲ್ಲಿ ನಡೆದಿದೆ.

ದೀಪಕ್‍ ಕುಮಾರ್(24) ಕೊಲೆಯಾದ ಯುವಕ. ಮಳೆಹಾನಿ ಸಂತ್ರಸ್ಥರಿಗೆ ಜಂಬೂರಿನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಟೈಲ್ಸ್ ಅಳವಡಿಸುವ ಕೆಲಸಕ್ಕೆ 2 ತಿಂಗಳ ಹಿಂದೆ ಬಿಹಾರದಿಂದ ಕಾರ್ಮಿಕರು ಬಂದಿದ್ದು, ಅವರಲ್ಲಿ ಓರ್ವ ಕೊಲೆಯಾಗಿಯಾಗಿದ್ದಾನೆ. 

ಜಂಬೂರಿನ ಜಯಕುಮಾರ್ ಎಂಬವರ ಕಾಫಿ ತೋಟದಲ್ಲಿ ಶವ ದೊರಕಿದ್ದು, ಕುತ್ತಿಗೆ ಹಾಗು ತಲೆಯಭಾಗಕ್ಕೆ ಕತ್ತಿ ಏಟು ಬಿದ್ದಿರುವುದರಿಂದ ಸೋಮವಾರಪೇಟೆ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

ಸ್ಥಳಕ್ಕೆ ಎಸ್.ಪಿ.,ಡಾ.ಸುಮನಾ ಡಿ.ಪನ್ನೇಕರ್, ಡಿವೈಎಸ್‍ಪಿ ಮುರುಳಿಧರ್, ಸಿ.ಐ. ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮಡಿಕೇರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಮೃತನ ಜೊತೆಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News