ಮೇಯಲು ಬಿಟ್ಟಿದ್ದ ಜಾನುವಾರುಗಳು ಅನುಮಾನಾಸ್ಪದ ಸಾವು: ದೂರು ದಾಖಲು

Update: 2019-10-12 15:55 GMT

ಹನೂರು, ಅ.12: ಮೇಯಲು ಬಿಟ್ಟಿದ್ದ ಜಾನುವಾರುಗಳು ಅನುಮಾನಸ್ಪಾದವಾಗಿ ಸಾವನ್ನಪ್ಪಿದೆ ಎಂದು ರೈತರೊರ್ವರು ರಾಮಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಚಿಕ್ಕಮಾದು 'ನನ್ನ ಎರಡು ಜಾನುವಾರುಗಳನ್ನು ಗ್ರಾಮದ ಹೊರವಲಯದಲ್ಲಿ ಮೇಯಲು ಬಿಟ್ಟು ನಾನು ಊಟ ಮಾಡಲು ಮನೆಗೆ ತೆರಳಿ ವಾಪಸ್ ಬರುವ ವೇಳೆಗೆ ಜಾನುವಾರುಗಳು ಅನುಮಾನಸ್ಪಾದವಾಗಿ ಸಾವನ್ನಪಿದೆ' ಎಂದು ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಪೋಲಿಸರು ಪ್ರಕರಣ ದಾಖಲಿಸಿಕೂಂಡು ಮುಂದಿನ ಕ್ರಮಕೈಗೊಂಡಿದ್ದಾರೆ 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News