ಟ್ರಕ್ಕಿಂಗ್ ತೆರಳಿದ್ದ ಯುವಕ ಬಂಡೆ ಕಲ್ಲಿನಿಂದ ಬಿದ್ದು ಗಾಯ

Update: 2019-10-12 17:41 GMT

ಚಿತ್ರದುರ್ಗ, ಅ.12: ಟ್ರಕ್ಕಿಂಗ್ ತೆರಳಿದ್ದ ಯುವಕ ಬಂಡೆ ಕಲ್ಲಿನ ಮೇಲಿಂದ ಬಿದ್ದು ಗಾಯಗೊಂಡ ಘಟನೆ ಚಿತ್ರದುರ್ಗದ ಏಳುಸುತ್ತಿನ ಕೋಟೆಯಲ್ಲಿ ನಡೆದಿದೆ.

ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದ ಬಳಿ ಬಿದ್ದು ಯುವಕನ ಕಾಲಿಗೆ ಗಾಯವಾಗಿದ್ದು, ಬೆಂಗಳೂರು ನಿವಾಸಿ ಸುಭಜೀತ್(20) ಗಾಯಳು ಯುವಕ ಎಂದು ಗುರುತಿಸಲಾಗಿದೆ.

ಕೋಟೆ ರಕ್ಷಣಾ ಸಿಬ್ಬಂದಿಗಳು ಯುವಕನನ್ನು ರಕ್ಷಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸಂಬಂದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News