ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ

Update: 2019-10-13 14:37 GMT

ಸಕಲೇಶಪುರ, ಅ.13: ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ದೊಡ್ಡ ಕೆರೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಗ್ರಾಮದ ಸಮೀಪದ ಪಲ್ಲವಿ (20) ಹಾಗೂ ಇಲ್ಲಿಯ ರಕ್ಷಿದ್ದಿ ಗ್ರಾಮದ ಪ್ರದೀಪ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳಾಗಿದ್ದಾರೆ .

ಪಲ್ಲವಿ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದಾಳೆಂದು ಗೋಣಿ ಬೀಡಿನ ಠಾಣೆಯಲ್ಲಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಇಬ್ಬರು ಧರ್ಮಸ್ಥಳಕ್ಕೆ ತೆರಳಿ ಮದುವೆಯಾಗಿ ರಾತ್ರಿ ಪಟ್ಟಣಕ್ಕೆ ಬಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಲ್ಲವಿ ಮತ್ತು ಪ್ರದೀಪ ಸಂಬಂಧಿಕರಾಗಿದ್ದಾರೆ. ಕುಟುಂಬದ ವಿರೋಧ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶವ ಪರೀಕ್ಷೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News