BIG BREAKING NEWS: ಬಾಬರಿ ಮಸೀದಿ ಸ್ಥಳದ ಮೇಲಿನ ಹಕ್ಕು ಬಿಟ್ಟು ಕೊಟ್ಟ ಸುನ್ನಿ ವಕ್ಫ್ ಬೋರ್ಡ್

Update: 2019-10-16 06:56 GMT

ಹೊಸದಿಲ್ಲಿ, ಅ.16: ನೂರಾರು ವರ್ಷಗಳ ಕಾಲ ಐತಿಹಾಸಿಕ ಬಾಬರಿ ಮಸೀದಿ ನೆಲೆನಿಂತಿದ್ದ ಭೂಮಿಯ ಮೇಲಿನ ಹಕ್ಕನ್ನು ಸುನ್ನಿ ವಕ್ಫ್ ಬೋರ್ಡ್ ಬಿಟ್ಟುಕೊಟ್ಟಿದ್ದು, ಈ ಪ್ರಕರಣದಲ್ಲಿ ತನ್ನ ಅಪೀಲನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿದೆ ಎಂದು thewire.in ವರದಿ ಮಾಡಿದೆ.

"ರಾಜಿ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಹೆಚ್ಚಿನದ್ದೇನೂ ಹೇಳಲು ಸಾಧ್ಯವಿಲ್ಲ" ಎಂದು ಅಯೋಧ್ಯೆ ವಿಚಾರಣೆಗೆ ಸಂಬಂಧಿಸಿ ಮೂಲವೊಂದು ತಿಳಿಸಿದ್ದಾಗಿ thewire.in ವರದಿ ತಿಳಿಸಿದೆ.

ಯಾವ ಷರತ್ತುಗಳಿಗೆ ಒಳಪಟ್ಟು ಸುನ್ನಿ ವಕ್ಫ್ ಬೋರ್ಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನುವುದು ಇನ್ನಷ್ಟೇ ತಿಳಿದುಬೇಕಿದೆ. ಬಾಬರಿ ಮಸೀದಿ ಕುರಿತ ವಿಚಾರಣೆಯ ಕೊನೆಯ ದಿನವಾದ ಇಂದು ಈ ಅಚ್ಚರಿಯ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News