ಸೋಮವಾರಪೇಟೆ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗುಂಡಿನ ದಾಳಿ

Update: 2019-10-20 18:13 GMT

ಕೊಡಗು, ಅ.20: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಸೋಮವಾರಪೇಟೆ ಪಟ್ಟಣದ ಕಾನ್ವೆಂಟ್ ಬಾಣೆ ಬಳಿ ನಡೆದಿದೆ.

ಪಟ್ಟಣದ ಕಾನ್ವೆಂಟ್ ಬಾಣೆ ನಿವಾಸಿ ಸುಜಿತ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಸೋಮವಾರಪೇಟೆ ನಿವಾಸಿ ಗುತ್ತಿಗೆದಾರ ಗಣಪತಿ ಗುಂಡು ಹಾರಿಸಿದ ಆರೋಪಿ ಎಂದು ತಿಳಿದುಬಂದಿದೆ.

ಬೋವಿ ಜನಾಂಗದ ಜಿಲ್ಲಾಧ್ಯಕ್ಷ ಸುಜಿತ್ ಎದೆಗೆ ಗುಂಡು ಹಾರಿಸಿದ್ದು, ಡಬಲ್ ಬ್ಯಾರೆಲ್ ಶಾರ್ಟ್ ಗನ್ ಬಳಸಿ ಶೂಟ್ ಮಾಡಲಾಗಿದೆ. ಗುತ್ತಿಗೆ ಪಡೆದ ವಿಚಾರಕ್ಕೆ ಇಬ್ಬರ ನಡುವೆ ಮಾತಿನ‌ ಚಕಮಕಿ ನಡೆದು ಜಗಳ ಉಂಟಾದಾಗ ಸುಜಿತ್ ಎದೆಗೆ ಗಣಪತಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಹೆಚ್ಚಿನ ಚಿಕಿತ್ಸೆಗೆ ಸುಜಿತ್ ರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News