ಮಿನಿ ಬಸ್ ಪಲ್ಟಿ: ಇಬ್ಬರು ಮೃತ್ಯು, 12 ಮಂದಿ ಗಾಯ

Update: 2019-10-21 17:48 GMT

ನಾಗಮಂಗಲ, ಅ.21: ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು  ಸಾವನ್ನಪ್ಪಿ, 12 ಪ್ರಯಾಣಿಕರು ಗಾಯಗೊಂಡಿರುವ  ಘಟನೆ ರವಿವಾರ ತಡರಾತ್ರಿ ತಾಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರಿಯ ಹೆದ್ದಾರಿ ಕದಬಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ಜಿಲ್ಲೆ ಹೊಸಕೋಟೆ ಮೂಲದ ಗೌತಮ್(20) ಹಾಗೂ ದರ್ಶನ್ (17) ಸಾವನ್ನಪ್ಪಿದ ಯುವಕರು. ಧರ್ಮಸ್ಥಳ ಯಾತ್ರೆ ಮುಗಿಸಿಕೊಂಡು ವಾಪಸ್ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬಸ್‍ನಲ್ಲಿ ಸುಮಾರು 25 ಮಂದಿ ಪ್ರಯಾಣಿಕರಿದ್ದು ಗಾಯಗೊಂಡವರನ್ನು ಹತ್ತಿರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಂಡಿನಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News