ನನ್ನ ಹಿತೈಷಿಗಳು, ನಾಯಕರು, ಸ್ನೇಹಿತರಿಗೆ ಅಭಿನಂದನೆಗಳು: ತಿಹಾರ್ ಜೈಲಿನಿಂದ ಬಿಡುಗಡೆ ಬಳಿಕ ಡಿಕೆಶಿ
Update: 2019-10-23 16:09 GMT
ಹೊಸದಿಲ್ಲಿ, ಅ.23: ದೆಹಲಿ ಹೈಕೋರ್ಟ್ ಗೆ ಧನ್ಯವಾದಗಳು. ನನಗೋಸ್ಕರ ಪೂಜೆ ಮಾಡಿ, ರಸ್ತೆಗಿಳಿದು ಹೋರಾಟ ಮಾಡಿದ ನನ್ನ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು, ನಾಯಕರು, ಸ್ನೇಹಿತರಿಗೆ, ನನ್ನ ಪರ ವಾದ ಮಾಡಿದ ವಕೀಲರಿಗೆ ಅಭಿನಂದನೆಗಳು ಎಂದು ಮಾಜಿ ಸಚಿವ, ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಹೇಳಿದರು.
ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಾಳೆ ವಿವರವಾಗಿ ಮಾತನಾಡುತ್ತೇನೆ. ನನ್ನ ಪರವಾಗಿ ಹೋರಾಡಿದ ನನ್ನ ಹಿತೈಷಿಗಳಿಗೆ, ಸ್ನೇಹಿತರಿಗೆ ಅಭಿನಂದನೆಗಳು. ನನ್ನಿಂದಾಗಿ ನೊಂದುಕೊಂಡವರಿದ್ದಾರೆ. ನನ್ನ ಪರವಾಗಿ ನಿಂತ ಹಲವಾರು ವಿರೋಧ ಪಕ್ಷದ ನಾಯಕರಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಡಿಕೆಶಿ ಹೇಳಿದರು.