ಗಂಧದ ಮರದ ತುಂಡುಗಳ ಅಕ್ರಮ ಸಾಗಾಟ ಯತ್ನ: ಐವರು ವಶಕ್ಕೆ

Update: 2019-10-23 17:37 GMT

ಮಡಿಕೇರಿ, ಅ.23: ಪೊನ್ನಂಪೇಟೆ ಅರಣ್ಯ ವಲಯ ವ್ಯಾಪ್ತಿಯ ನಲ್ಲೂರು ಗ್ರಾಮದ ತೋಟವೊಂದರಿಂದ 8.50 ಲಕ್ಷ ಮೌಲ್ಯದ 50 ಕೆ.ಜಿ ಶ್ರೀಗಂಧದ ಮರದ ತುಂಡುಗಳನ್ನು ಅಕ್ರಮವಾಗಿ ಕಡಿದು ಸಾಗಿಸಲು ಯತ್ನಿಸುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ.

ಗೋಣಿಕೊಪ್ಪ ನಿವಾಸಿ ಬಿ.ರಾಜು, ಮುರುಗ, ಕುಮಾರ್, ಸತ್ಯ ಹಾಗೂ ಗಣೇಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುಮಾರು 6 ತಿಂಗಳ ಹಿಂದೆ ಆನೆಚೌಕುರ್ ಗೇಟ್ ಬಳಿ ಅಕ್ರಮವಾಗಿ ಗಂಧ ಸಾಗಿಸುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳ ಕಣ್ಣುತಪ್ಪಿಸಿ ಈ ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ.

ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಿತಿಮತಿ ಉಪವಿಭಾಗದ ಬಿ.ಎನ್.ಶ್ರೀಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಲಿನಿ ಇವರುಗಳ ಮಾರ್ಗದರ್ಶನದಲ್ಲಿ ಈ ಬಾರಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆರೋಪಿಗಳು ಬಲೆಗೆ ಬಿದ್ದಿದ್ದಾರೆ.

ವಲಯ ಅರಣ್ಯಾಧಿಕಾರಿ ತೀರ್ಥ ಅವರ ನೇತೃತ್ವದಲ್ಲಿ ಉಪ ಅರಣ್ಯ ಪಾಲಕರಾದ ಮಂಜುನಾಥ್, ಗಣೇಶ್, ರಾಘವನಾಯಕ್. ಅರಣ್ಯ ರಕ್ಷಣಾ  ಸಿಬ್ಬಂದಿಗಳಾದ ರಾಜೇಶ್, ಚೌಡಪ್ಪ ಪ್ರಕಾಶ್, ಜಿಡ್ಡಿಮನಿ, ಸಂಜಯ್ ಚೌವ್ಹಾನ್, ಅಂತೋಣೆ, ಪ್ರಕಾಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News