ರೈಲು ಢಿಕ್ಕಿ: ಮೂರು ಎಮ್ಮೆಗಳು ಸಾವು

Update: 2019-10-26 17:18 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಅ. 26: ಹಳಿ ದಾಟುವ ವೇಳೆ ರೈಲು ಢಿಕ್ಕಿ ಹೊಡೆದ ಪರಿಣಾಮ ಮೂರು ಎಮ್ಮೆಗಳು ಸ್ಥಳದಲ್ಲಿಯೇ ಮೃತಪಟ್ಟು, ಎರಡು ಎಮ್ಮೆಗಳು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಗೆಜ್ಜೇನಹಳ್ಳಿ ರಸ್ತೆಯ ಕಾಶೀಪುರ ರೈಲ್ವೆ ಗೇಟ್ ಬಳಿ ನಡೆದಿದೆ. 

ಶನಿವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಶಿವಮೊಗ್ಗದಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ರೈಲಿಗೆ ಎಮ್ಮೆಗಳು ಸಿಲುಕಿವೆ. ಜಾನುವಾರುಗಳ ಮಾಲಕರು ಯಾರು ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ. 

'ಈ ಸ್ಥಳದಲ್ಲಿ ನಿರಂತರವಾಗಿ ರೈಲಿಗೆ ಸಿಲುಕಿ ಜಾನುವಾರುಗಳು ಅಸುನೀಗುತ್ತಿವೆ. ಕಳೆದ ಕೆಲ ವಾರಗಳ ಹಿಂದೆಯೂ ಇದೇ ಸ್ಥಳದಲ್ಲಿ ರೈಲಿಗೆ ಸಿಲುಕಿ ಮೂರು ಆಕಳುಗಳು ಮೃತಪಟ್ಟಿದ್ದವು. ಈ ಬಗ್ಗೆ ರೈಲ್ವೆ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಅವಘಡ ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News