ಉಪಚುನಾವಣೆ: ಎರಡನೆ ದಿನ ಮೂರು ನಾಮಪತ್ರ ಸಲ್ಲಿಕೆ

Update: 2019-11-12 16:48 GMT

ಬೆಂಗಳೂರು, ನ.12: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೆ ದಿನದಂದು ಕೇವಲ ಮೂರು ನಾಮಪತ್ರಗಳಷ್ಟೇ ಸಲ್ಲಿಕೆಯಾಗಿವೆ.

ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ರಾಮಪ್ಪ ಕುರಬೆಟ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಇಷ್ತಿಯಾಕ್ ಅಹಮದ್ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ತಿಮ್ಮಾಭೋವಿ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಮೊದಲನೆ ದಿನ 36 ಅಭ್ಯರ್ಥಿಗಳಿಂದ 37 ನಾಮಪತ್ರ ಹಾಗೂ ಎರಡನೆ ದಿನ ಮೂರು ಅಭ್ಯರ್ಥಿಗಳಿಂದ ಸೇರಿದಂತೆ ಒಟ್ಟಾರೆ 39 ಅಭ್ಯರ್ಥಿಗಳಿಂದ 40 ನಾಮಪತ್ರಗಳು ಸಲ್ಲಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News